Thursday, December 3, 2009

ಅಮೃತದ ಹನಿ

ಮರುಭೂಮಿಯಲ್ಲಿ ಹನಿ ನೀರಿಗಾಗಿ ನಾನು ಒದ್ದಾಡುತ್ತಿದ್ದೆ!
ದಾಹವು ಎನ್ನನ್ನು ಮುಗಿಸಿಯೇಬಿಟ್ಟೀತೆ ಎಂಬ ಭಯದಲ್ಲಿದ್ದೆ!
ಪ್ರಾಣ ಭಿಕ್ಷೆಗಾಗಿ ಅವನಲ್ಲಿ ಮೊರೆಯನ್ನಿಟ್ಟಿದ್ದೆ!
ಅನಥರಕ್ಷಕನೆಂದು ಅವನಲ್ಲಿ ಭರವಸೆಯನ್ನಿಟ್ಟಿದ್ದೆ!

ಮರುಗಳಿಗೆಯಲ್ಲಿಯೇ ಕರುಣಾಮಯಿಯ ಕೃಪಾಸುಧೆ ನನ್ನನ್ನು ಮುಟ್ಟಿತ್ತು!
ಊರಿಂದ ಕರೆಯೊಂದು ಅಪಾರ ಭರವಸೆಯ ಕೊಟ್ಟಿತ್ತು!
ಸಂಧ್ಯಾಕಾಲದಲ್ಲಿ ಕಂಡ ಜ್ಯೋತಿಯು, ಪ್ರಾಣ ಭಿಕ್ಷೆಯ ನೀಡಿತ್ತು!
ಅಮೃತದ ಹನಿಯೊಂದು ಎನ್ನ ದಾಹವ ನೀಗಿಸಿತ್ತು!

ಹನಿ ಒಂದಾದರೇನು ಎರಡಾದರೇನು, ಅಮೃತದ ಸಿಹಿ ಸಿಹಿಯಲ್ಲವೇನು!

Monday, October 12, 2009

Awareness - ಅರಿವು

ಒಂದಾನೊಂದು ಕಾಲದಲ್ಲಿ ನೀ ಯಾರೋ, ನಾ ಅರಿಯೆ!
ಅಂದು ಎರಡು ಕ್ಷಣಗಳಲ್ಲಿ,
ಎನ್ನ ಅರಿವು ನಿನಗ ಸದಾ ಇತ್ತೆಂಬುದು ನಾ ಅರಿತೆ!
ನಿನ್ನ ಕೃಪೆಯೊಂದಿದ್ದರೆ, ನನ್ನಲ್ಲಿ, ನಿನ್ನ ಅರಿವನ್ನು ಅರಿವೇ!
ಕಾಲ ಎಂದು ಕೂಡಿ ಬರುವುದೋ, ರಮಣನೇ! ನಾ ಅರಿಯೆ!

Once upon a time, I never knew who You were!
In those two seconds I knew,
forever you knew me everywhere!
If only for Your Grace, You are my Self, I would know!
When will that right time arrive, O! Ramana, I never know!

I Love You!

When You look deep into my 'eye'!
It seems to shake off the 'i'!
And take me, towards the 'I'!

A reason for pure Love, is simply a lie!
All You say is enquire and allow the vasanas to die!
Abide in pure Love and it is just I, I!

Wednesday, August 12, 2009

Bungee jumping!! Why bother?

Life, I feel is like bungee jumping! I've jumped into this 'world' with Him being the rope! It is the faith on the 'rope' that matters! But nothing to worry. The assurance is from none but the 'rope' Himself!! Even if I want to, I can't let go of the 'rope'. I'll finally 'land' safely, of course, along with the 'rope' tied around me.

Now that I am still swinging & swirling from one corner to the other, I just don't want to bother. Why bother, when the 'end' is guaranteed?

Friday, August 7, 2009

Let me just be - I am!

When I feel bored about life
When I feel glad about life
When life bugs me with problems
When I feel like saying 'enough is enough!'
When I feel like saying 'hurraay!'
Let me just be - I am!

When I feel disgusted about myself
When I feel disgusted about others
When others throw stones at me
When others throw sweets at me
When undesirable thoughts creep into mind
Let me just be - I am! Let me just be - I am!!

Thursday, August 6, 2009

ಪ್ರಣಾಮ - 2

ಬರಡು ಭೂಮಿಯಂತಿರುವ ಎನ್ನ ಹೃದಯವನು ಪ್ರೀತಿಯ ಮಳೆ ಸುರಿಸಿ ಪೋಷಿಸುವವನೇ!
ಐಹಿಕ ಸುಖದ ಕಾಡಾಗಿರುವ ಎನ್ನ ಮನವನು ಜ್ಞಾನಾಗ್ನಿಯ ಕಡ್ಗಿಚ್ಚಿನಿಂದ ಭಸ್ಮ ಮಾಡುವವನೇ!
ಬೆಟ್ಟ ಗುಡ್ಡಗಳಂತಿರುವ ಕಷ್ಟಗಳನು ಬೆಣ್ಣೆಯಂತೆ ಕರಗಿಸಿ ಆಹುತಿ ಪಡೆಯುವವನೇ!
ಎನ್ನೊಡೆಯ ಶ್ರೀ ರಮಣನೇ! ನಿನ್ನ ಚರಣಾರವಿಂದಗಳಿಗೆ ಶತ ಕೋಟಿ ಪ್ರಣಾಮ!!

Friday, July 31, 2009

ಕರುಣಾಪೂರ್ಣನ ಕೃಪಾಸುಧೆ

ರೋಗವೊಂದು ಇಂದು ಎನ್ನನ್ನು ಕಾಡಿತ್ತು!
ಬಲಿ ತೆಗೆಯುವ ಕುತಂತ್ರ ಹೂಡಿತ್ತು!!

ಮೆಲ್ಲನೆ ನುಸುಳಿ ವಿಷವನು ಬೆರೆಸಿ ಮನವನು ಆಕ್ರಮಿಸಿಕೊಂಡಿತ್ತು!
ತಿಳಿದೋ, ತಿಳಿಯದೆಯೋ ನನ್ನ ಮನವು ವಿಷವನೆ ಸಿಹಿ ಎಂದು ನಂಬಿತ್ತು!

ಸಿಹಿಯ ಗುಣವನು ವಿಚಾರಿಸಿ ಅರಿಯುವ ಮುನ್ನ
ರೋಗವು ಎನನ್ನು ವಶಪಡಿಸಿಕೊಂಡಿತ್ತು!
ಬಲಿ ತೆಗೆಯುವ ಕುತಂತ್ರ ಹೂಡಿತ್ತು!

ವಿಷದಲಿ ಮುಳುಗಿ ಬಲಿಯಾಗುವ ಮುನ್ನ
ಅರಿಯದೊಂದು ಶಕ್ತಿ ಎನ್ನಲಿ ಮೂಡಿತ್ತು!
ಹೃದಯದಿಂದ ಅರುಣಾಚಲನನ್ನು ನೆನೆದಿತ್ತು!

ಅರುಣಾಚಲನನ್ನು ಸ್ಮರಿಸದ ತಪ್ಪಿಗೆ ಕ್ಷಮೆಯಾಚಿಸಿತ್ತು!
'ಎನ್ನ ರಕ್ಷಿಸಿ ಪೋಷಿಸು' ಎಂದು ಭಕ್ತಿಪೂರ್ವಕ ಪ್ರಾರ್ಥಿಸಿತ್ತು!

ಕರುಣಾಪೂರ್ಣನ ಕೃಪಾಸುಧೆ ಎನ್ನ ಮನವನು ತಲುಪಿತ್ತು!
ವಿಷದ ವಿಷಮವನು ಬಡಿದೋಡಿಸಿತ್ತು!
ಬಲಿ ತೆಗೆಯುವ ರೋಗದ ಕುತಂತ್ರವನು ಮಟ್ಟಹಾಕಿತ್ತು!
ಸ್ನೇಹದ ವರವನು ನೀಡಿತ್ತು!
ಸ್ನೇಹದ ವರವನು ನೀಡಿತ್ತು!!

.... ಕರುಣಾಪೂರ್ಣನ ಕೃಪೆಗೆ ಪಾತ್ರನಾದ ನಾನೇ ಧನ್ಯ!
.....ಸ್ನೇಹದ ವರವನ್ನು ಪಡೆದ ನಾನೇ ಧನ್ಯ!

Wednesday, July 22, 2009

ವಿರಹ ಗೀತೆ


ಸಂಸಾರ ಸಾಗರದಲಿ ಅಹಂಕಾರ ತಿಮಿಂಗಿಲಗಳೆನ್ನನು
ಕಿತ್ತು ತಿನ್ನುತಿದೆ, ನಿನಗಿನ್ನು ಕರುಣೆಬಾರದೇಕೆ! ಪ್ರಭು?

ಇಂದ್ರಿಯ ವಾಸನೆಗಳು ಭೂತ ಪಿಶಾಚಿಗಳಂತೆ
ಎನ್ನನು ಮಸಣಕ್ಕೊಯ್ಯ್ದಿವೆ
ಎನ್ನ ರಕ್ಷಿಸಿ ಅನುಗ್ರಹಿಸುವ ಹೊಣೆ ನಿನ್ನದಲ್ಲವೇ! ಪ್ರಭು?

ಕಣ್ಣೀರ ಧಾರೆ ಹರಿಸಿ ಮಂಡಿಸುವೆನು ಪ್ರಶ್ನೆಯನು ಕೊರಗುತ
ನನ್ನ ವಿರಹವು ನಿನ್ನ ವಿರಹವೂ ಅಲ್ಲೆವೇ! ಪ್ರಭು?

ದಿನನಿತ್ಯವೂ ನಿನ್ನ ಸಿಹಿನೆನಪಿನಿಂದ ಮನಸ್ಸನು ಹಸಿರಾಗಿರಿಸಲು
ವಿರಹದಲಿ ಸಿಹಿಯನ್ನೇನಾದರು ಕಂಡುಕೊಂಡೆಯಾ! ಪ್ರಭು?

ನಿನ್ನನಗಲಿ ನೊಂದಿಹೆನು, ನೊಂದು ಬೆಂದಿಹೆನು
ಅಗಲಿಕೆಯ ವಿರಹವಿನ್ನು ಮುಗಿದಿಲ್ಲವೇಕೆ! ಪ್ರಭು?
ಇನ್ನೂ ಮುಗಿದಿಲ್ಲವೇಕೆ?

Tuesday, July 21, 2009

ಮನೆಯ ಕಟ್ಟುವೆನು

ಕಟ್ಟುವೆನು ಕಟ್ಟುವೆನು ಮನವೆಂಬ ಮನೆಯ ಕಟ್ಟುವೆನು!
ಸಾಗರಕ್ಕಿಂತ ವಿಶಾಲ, ಆಕಾಶಕ್ಕಿಂತ ಎತ್ತರ
ಹೀಗೊಂದು
ಮನೆಯ ಕಟ್ಟುವೆನು!

ಮನೆಯಲಿ ಕಲ್ಲುಗಂಬಗಳಿಲ್ಲ, ಇಲ್ಲ ಕಲ್ಲು ಚಪ್ಪಡಿ
ರಮಣನೇ ಆಧಾರಸ್ತಂಭ, ಇಲ್ಲಿ ಅರುಣಾಚಲನೇ ಚಾವಡಿ!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಸೂರ್ಯಚಂದ್ರರಿಲ್ಲ, ಇಲ್ಲ ಅವರಿಬ್ಬರ ಗ್ರಹಣವು
ರಮಣನ ತೇಜಃಪುಂಜವಿರಲು, ಸದಾ ಪ್ರಜ್ವಲಿಸುವುದು ನನ್ನಗೃಹವು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಬಂಧು ಬಾಂಧವರಿಲ್ಲ, ಇಲ್ಲ ಮಡದಿ ಮಕ್ಕಳು
ರಮಣನೇ ನಾವಿಕನಾಗಿರಲು, ದಾಟಿಸುವನು ಸಂಸಾರ ಸಾಗರವನು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಪಡಸಾಲೆ ಅಡುಗೆಸಾಲೆಗಳಿಲ್ಲ, ಇಲ್ಲ ದೇವರಕೋಣಿಯು
ರಮಣನೇ ಅಡುಗೆಭಟ್ಟನಾಗಿರಲು, ದಿನನಿತ್ಯ
ದೊರಕುವುದು ದಿವ್ಯಪ್ರಸಾದವು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಆಳು-ಕಾಳುಗಳಿಲ್ಲ, ಇಲ್ಲ ರಾಜ-ರಾಣಿಯರು
ರಮಣನೊಬ್ಬನೇ ಚಕ್ರವರ್ತಿಯಾಗಿರಲು, ನಾನೇ ಅವನ ದಾಸನು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ದೇವರಮೂರ್ತಿಗಳಿಲ್ಲ, ಇಲ್ಲ ಅಭಿಷೇಕಾಚರ್ನೆಗಳು
ರಮಣನೇ ಸರ್ವಸ್ವನಾಗಿರಲು, ಕಾಣುವೆನೆಲ್ಲಡೆ ಪರಮಾನಂದವನು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಂಗಳದಲಿ ನಿಂತು "ತೆರೆದಿದೆ ಮನೆ ಓ ಬಾ ಅತಿಥಿ..." ಎಂದು
ರಮಣನೇ ಆಹ್ವಾನಿಸುತಿರಲು, ಅವನ
ಜೋಡಿ ಆಡಿ ನಲಿದಾಡುವೆನು!
ಕಟ್ಟುವೆನು ಕಟ್ಟುವೆನು, ಮನಸೆಂಬ ಮನೆಯ ಕಟ್ಟುವೆನು!

Monday, July 20, 2009

ನೀ ಎನ್ನ ಸೆಳೆದಾಗ....

) ಪ್ರಣಾಮ
ಎನ್ನ ಮನದಲ್ಲಿ ಜ್ಞಾನದಾಹ ಬೀಜವನ್ನು ಬಿತ್ತಿ ಪೋಷಿಸಿದವನೆ!
ಎನ್ನ ಪಾದಗಳಿಗೆ ಅರುಣಗಿರಿ ಪ್ರದಕ್ಷಿಣೆ ಸವಿರುಚಿ ತೋರಿಸಿದವನೆ!
ಎನ್ನ ಹೃದಯಾಂತರಂಗವನು ಕರುಣಾಪೂರ್ಣ ಕಂಗಳಿಂದ ಸ್ಪರ್ಶಿಸಿದವನೆ!
ಎನ್ನೊಡೆಯ ಶ್ರೀ ರಮಣನೆ ನಿನಗೆ ಶತಕೋಟಿ ಪ್ರಣಾಮ!!

) ಸೋತಿಹೆನು
ನಿನ್ನನು ಕೊಂಡಾಡಲು
ಪದಪುಂಜವೇ ಸಾಲದೆ ಸೋತಿಹೆನು!
ನಿನಗೆ ಸಮರ್ಪಕವಾಗಿ ಕೃತಜ್ಞತೆಗಳನ್ನರ್ಪಿಸಲಾಗದೆ ಸೋತಿಹೆನು!
ಭಾವುಕನಾಗಿ, ನಿನ್ನ ಮಹಿಮೆಯನು ಪಾಡಲಾಗದೆ ಸೋತಿಹೆನು!
ನಿನ್ನ ಕೃಪಾಸುಧೆಗೆ ಮೂಕವಿಸ್ಮಿತನಾಗಿ ಸೋತಿಹೆನು!
ಸೋತಿಹೆನು ನಾ ಸೋತಿಹೆನು ಶ್ರೀ ರಮಣನೆ!
ನಿನಗೆ ನಾ ಮನಸೋತಿಹೆನು!!

ಶ್ರೀ ರಮಣಾರ್ಪಣಮಸ್ತು.

Thursday, July 16, 2009

ಭಜಿಸಿ ರಮಣನಾಮವನು

ಸುಖದಲಿ ರಮಣನಾಮ ಕೊಡುವುದು ಭಕುತಿಯನು
ದುಃಖದಲಿ ರಮಣನಾಮ ಕೊಡುವುದು ಶಕುತಿಯನು
ಭಕುತಿ-ಶಕುತಿಗಳ ನಡುವೆ ಕೊಡಲಿ ರಮಣನಾಮ ಮುಕುತಿಯನು
ಕೊಡಲಿ ರಮಣನಾಮ ಮುಕುತಿಯನು!

ಭಯಭೀತಿಯಲಿ ರಮಣನಾಮ ಕೊಡುವುದು ಧೈರ್ಯವನು
ಕುಗ್ಗಿದಾಗ ಸಂಸಾರದಲಿ ರಮಣನಾಮ ಕೊಡುವುದು ಸ್ಥೈರ್ಯವನು
ಧೈರ್ಯ-ಸ್ಥೈರ್ಯಗಳ ನಡುವೆ ಕೊಡಲಿ ರಮಣನಾಮ ಜ್ಞಾನಾಭ್ಯುದಯವನು
ಕೊಡಲಿ ರಮಣನಾಮ
ಜ್ಞಾನಾಭ್ಯುದಯವನು!

ನಿನ್ನ ನಾಮಸ್ಮರಣೆಗಿಂತ ಸಿಹಿಯಾದದ್ದು ಬೇರೊಂದಿಲ್ಲ
ನಿನ್ನ ನಾಮಸ್ಮರಣೆಯೊಂದಿದ್ದರೆ
ಬೇರೇನೂ ಬೇಕಿಲ್ಲ
ಸಂಸಾರದ ಬೇಕು-ಬೇಡಗಳ ನಡುವೆ ಕೊಡಲಿ ರಮಣನಾಮ ಶರಣಾಗತಿಯನು
ಕೊಡಲಿ ರಮಣನಾಮ ಶರಣಾಗತಿಯನು!

ತ್ಯಜಿಸಿ ದೇಹಾಭಿಮಾನವನು ಭಜಿಸಿ ರಮಣನಾಮವನು!
ಭಜಿಸಿ ರಮಣನಾಮವನು! ಭಜಿಸಿ ರಮಣನಾಮವನು!!
ಪಡೆಯಿರಿ ಕೃಪಾಕಟಾಕ್ಷವನು ಭಜಿಸಿ ರಮಣನಾಮವನು!
ಭಜಿಸಿ ರಮಣನಾಮವನು! ಭಜಿಸಿ ರಮಣನಾಮವನು!!


Monday, July 6, 2009

ಆ ಎರಡು ಕ್ಷಣಗಳು ...



ಸುದಿನ, ನಿಮ್ಮ ತೀಕ್ಷ್ಣ ಕಣ್ಣಂಚಿನ ಮೌನ ಎನಗೆ 'ಬಾ' ಎಂದಂತಿತ್ತು!
ನಿಮ್ಮ ಕಂಗಳು ವಿಶಾಲ ಸಾಗರವೆಂಬಂತೆ ನನ್ನನ್ನು ಮುಳುಗಿಸಿ ನುಂಗಿದಂತಿತ್ತು!
ನಿಮ್ಮ ಕಂಗಳ ವರ್ಚಸ್ಸು ನನ್ನ ಮನಸ್ಸಿನ ಎಲ್ಲೆಗಳ ಆಚೆಗೆ ಬೆಳಕ ಹರಿಸಿದಂತಿತ್ತು!
ನಿಮ್ಮ ನೋಟ ಮಾತ್ರದಿಂದಲೇ ನಾನು ನೀರಾಗಿ, ಕಣ್ಣೀರ ಧಾರೆಯಾಗಿ ಹರಿದೆನು!
ಕ್ಷಣದಲ್ಲಿ ಹಿಂದೆಂದೂ ಕಾಣದ ಪ್ರೀತಿ ವಾತ್ಸಲ್ಯವನು, ಕರುಣಾಧಾರೆಯನು ನಿಮ್ಮಲ್ಲಿ ಕಂಡೆನು!!

ಏನೆಂದು ಬಣ್ಣಿಸಲಿ ರಮಣಾಚಲ?
ಕಬ್ಬಿಣದ ಕಸವಾಗಿದ್ದ
ನನ್ನನ್ನು ಸೂಜಿಗಲ್ಲಿನಂತೆ
ಸೆಳೆದು ಸೆರೆಹಿಡಿದ ಎರಡು ಕ್ಷಣಗಳ ಏನೆಂದು ನಾ ಬಣ್ಣಿಸಲಿ?
ಮೌನದಲೇ ಮಾತನಾಡಿಸಿ ಮೂಕವಿಸ್ಮಿತಗೊಳಿಸಿದ
ನಿಮ್ಮ ಮಹಿಮೆಯನು ನಾನೇನೆಂದು ಬಣ್ಣಿಸಲಿ ತಂದೆ!

ಸೋತಿಹೆನು ಮಾಡಲಾಗದೆ ಕ್ಷಣದ
ವರ್ಣನೆ!
ಆದರೂ, ಸದಾ ಇರಲಿ ನನಗೆ ಕ್ಷಣದ
ಸ್ಮರಣೆ!

ಆಶೆಗಳು ಇಲ್ಲವೆನಲು ನಾ ಯೋಗ್ಯ ಯೋಗಿಯೇನಲ್ಲ!
ಇರಲಿ ಒಂದೇ ಒಂದು, ಆಶೆಯೊಂದೆನಗೆ
ಇರಲಿ ಜೀವನದ ಕ್ಷಣ ಕ್ಷಣವು, ಪ್ರತಿ ಕ್ಷಣವೂ
ಎರಡು ಕ್ಷಣಗಳಂತೆ!! ಎರಡು ಕ್ಷಣಗಳಂತೆ!!!

.....ನಿಮ್ಮ ಪವಿತ್ರ ಚರಣಾರವಿಂದಗಳಲ್ಲಿ .

Thursday, April 30, 2009

Give me strength

O Arunachala Ramana!, give me strength
Give me strength to face the odds of life
Give me strength to long for you and you alone
Give me strength to give up my anger on others
Give me strength to love you more
Give me strength to have patience
Give me strength to accept things, sweet or sour
Give me strength to trust you like always
Give me strength, give me strength, I pray.

Wednesday, February 18, 2009

Painful Separation

Hey Arunachala, my Lord Supreme!
Time and again I am pinned and pained,
that I am still far away from Thee, my Lord.

With tearful eyes, I ask Thee now,
Am I not a part of Thee? Am I not, my Lord?

O! Mother of Grace Divine,
How can Thou betray Thy son such?

The senses are eating me, the ego is decomposing me.
Fear of separation from Thee is gripping me, my Lord.

If I can feel this pain of separation,
Don't Thou also feel the same, my Lord?

I know, Thou would act soon, with Thy Grace Supreme!
and save this speck out of the clutches of samsara.

My Lord, give me a place, I beg
Give me a place at Thy Holy Feet.
Give me a place at Thy Holy Feet, my Lord!