ರೋಗವೊಂದು ಇಂದು ಎನ್ನನ್ನು ಕಾಡಿತ್ತು!
ಬಲಿ ತೆಗೆಯುವ ಕುತಂತ್ರ ಹೂಡಿತ್ತು!!
ಮೆಲ್ಲನೆ ನುಸುಳಿ ವಿಷವನು ಬೆರೆಸಿ ಮನವನು ಆಕ್ರಮಿಸಿಕೊಂಡಿತ್ತು!
ತಿಳಿದೋ, ತಿಳಿಯದೆಯೋ ಈ ನನ್ನ ಮನವು ವಿಷವನೆ ಸಿಹಿ ಎಂದು ನಂಬಿತ್ತು!
ಸಿಹಿಯ ಗುಣವನು ವಿಚಾರಿಸಿ ಅರಿಯುವ ಮುನ್ನ
ರೋಗವು ಎನನ್ನು ವಶಪಡಿಸಿಕೊಂಡಿತ್ತು!
ಬಲಿ ತೆಗೆಯುವ ಕುತಂತ್ರ ಹೂಡಿತ್ತು!
ವಿಷದಲಿ ಮುಳುಗಿ ಬಲಿಯಾಗುವ ಮುನ್ನ
ಅರಿಯದೊಂದು ಶಕ್ತಿ ಎನ್ನಲಿ ಮೂಡಿತ್ತು!
ಹೃದಯದಿಂದ ಅರುಣಾಚಲನನ್ನು ನೆನೆದಿತ್ತು!
ಅರುಣಾಚಲನನ್ನು ಸ್ಮರಿಸದ ತಪ್ಪಿಗೆ ಕ್ಷಮೆಯಾಚಿಸಿತ್ತು!
'ಎನ್ನ ರಕ್ಷಿಸಿ ಪೋಷಿಸು' ಎಂದು ಭಕ್ತಿಪೂರ್ವಕ ಪ್ರಾರ್ಥಿಸಿತ್ತು!
ಕರುಣಾಪೂರ್ಣನ ಕೃಪಾಸುಧೆ ಎನ್ನ ಮನವನು ತಲುಪಿತ್ತು!
ವಿಷದ ವಿಷಮವನು ಬಡಿದೋಡಿಸಿತ್ತು!
ಬಲಿ ತೆಗೆಯುವ ರೋಗದ ಕುತಂತ್ರವನು ಮಟ್ಟಹಾಕಿತ್ತು!
ಸ್ನೇಹದ ವರವನು ನೀಡಿತ್ತು! ಸ್ನೇಹದ ವರವನು ನೀಡಿತ್ತು!!
.... ಕರುಣಾಪೂರ್ಣನ ಕೃಪೆಗೆ ಪಾತ್ರನಾದ ನಾನೇ ಧನ್ಯ!
.....ಸ್ನೇಹದ ವರವನ್ನು ಪಡೆದ ನಾನೇ ಧನ್ಯ!
Friday, July 31, 2009
Subscribe to:
Post Comments (Atom)
Profound one, could not get meaning at first read!
ReplyDelete