Wednesday, July 22, 2009

ವಿರಹ ಗೀತೆ


ಸಂಸಾರ ಸಾಗರದಲಿ ಅಹಂಕಾರ ತಿಮಿಂಗಿಲಗಳೆನ್ನನು
ಕಿತ್ತು ತಿನ್ನುತಿದೆ, ನಿನಗಿನ್ನು ಕರುಣೆಬಾರದೇಕೆ! ಪ್ರಭು?

ಇಂದ್ರಿಯ ವಾಸನೆಗಳು ಭೂತ ಪಿಶಾಚಿಗಳಂತೆ
ಎನ್ನನು ಮಸಣಕ್ಕೊಯ್ಯ್ದಿವೆ
ಎನ್ನ ರಕ್ಷಿಸಿ ಅನುಗ್ರಹಿಸುವ ಹೊಣೆ ನಿನ್ನದಲ್ಲವೇ! ಪ್ರಭು?

ಕಣ್ಣೀರ ಧಾರೆ ಹರಿಸಿ ಮಂಡಿಸುವೆನು ಪ್ರಶ್ನೆಯನು ಕೊರಗುತ
ನನ್ನ ವಿರಹವು ನಿನ್ನ ವಿರಹವೂ ಅಲ್ಲೆವೇ! ಪ್ರಭು?

ದಿನನಿತ್ಯವೂ ನಿನ್ನ ಸಿಹಿನೆನಪಿನಿಂದ ಮನಸ್ಸನು ಹಸಿರಾಗಿರಿಸಲು
ವಿರಹದಲಿ ಸಿಹಿಯನ್ನೇನಾದರು ಕಂಡುಕೊಂಡೆಯಾ! ಪ್ರಭು?

ನಿನ್ನನಗಲಿ ನೊಂದಿಹೆನು, ನೊಂದು ಬೆಂದಿಹೆನು
ಅಗಲಿಕೆಯ ವಿರಹವಿನ್ನು ಮುಗಿದಿಲ್ಲವೇಕೆ! ಪ್ರಭು?
ಇನ್ನೂ ಮುಗಿದಿಲ್ಲವೇಕೆ?

No comments:

Post a Comment