Wednesday, July 22, 2009
ವಿರಹ ಗೀತೆ
ಸಂಸಾರ ಸಾಗರದಲಿ ಅಹಂಕಾರ ತಿಮಿಂಗಿಲಗಳೆನ್ನನು
ಕಿತ್ತು ತಿನ್ನುತಿದೆ, ನಿನಗಿನ್ನು ಕರುಣೆಬಾರದೇಕೆ! ಪ್ರಭು?
ಇಂದ್ರಿಯ ವಾಸನೆಗಳು ಭೂತ ಪಿಶಾಚಿಗಳಂತೆ ಎನ್ನನು ಮಸಣಕ್ಕೊಯ್ಯ್ದಿವೆ
ಎನ್ನ ರಕ್ಷಿಸಿ ಅನುಗ್ರಹಿಸುವ ಹೊಣೆ ನಿನ್ನದಲ್ಲವೇ! ಪ್ರಭು?
ಕಣ್ಣೀರ ಧಾರೆ ಹರಿಸಿ ಮಂಡಿಸುವೆನು ಈ ಪ್ರಶ್ನೆಯನು ಕೊರಗುತ
ನನ್ನ ಈ ವಿರಹವು ನಿನ್ನ ವಿರಹವೂ ಅಲ್ಲೆವೇ! ಪ್ರಭು?
ದಿನನಿತ್ಯವೂ ನಿನ್ನ ಸಿಹಿನೆನಪಿನಿಂದ ಮನಸ್ಸನು ಹಸಿರಾಗಿರಿಸಲು
ಈ ವಿರಹದಲಿ ಸಿಹಿಯನ್ನೇನಾದರು ಕಂಡುಕೊಂಡೆಯಾ! ಪ್ರಭು?
ನಿನ್ನನಗಲಿ ನೊಂದಿಹೆನು, ನೊಂದು ಬೆಂದಿಹೆನು
ಅಗಲಿಕೆಯ ಈ ವಿರಹವಿನ್ನು ಮುಗಿದಿಲ್ಲವೇಕೆ! ಪ್ರಭು?
ಇನ್ನೂ ಮುಗಿದಿಲ್ಲವೇಕೆ?
Subscribe to:
Post Comments (Atom)
No comments:
Post a Comment